Thursday, July 28, 2011

poem for "Shraavana sambhrama kavi goshti

ಮತ್ತೆ ಬ೦ದಿದೆ ಶ್ರಾವಣ

ಸುರಿದಿದೆ ಮಳೆ
ತು೦ಬಿ ಹರಿದಿದೆ ಹೊಳೆ
ತೂಗಿದೆ ಹಸಿರಿನ ತೋರಣ
ಹಬ್ಬ ಸಾಲಿನ ಸ೦ಭ್ರಮ.
ಮತ್ತೆ ಬ೦ದಿದೆ ಶ್ರಾವಣ.

ಎದೆ ಎದೆಯಲಿ ಹರಿದುಕ್ಕಿದೆ
ಪ್ರೀತಿಯ ಸರಿತೆ
ಜಡ ಬದುಕಲಿ ಒಡ ಮೂಡಿದೆ
ಚೈತನ್ಯದ ಒರತೆ.

ಹೂ ಹಣ್ಣಿನ ಸ೦ಭ್ರಮದಲಿ
ತು೦ಬಿದೆ ಬದುಕಿನ ಬಾಗಿನ
ಮನದಾಳವ ಮಥಿಸುತ್ತಿದೆ
ಅನುಭಾವದ ಚಿ೦ತನ.
ಮತ್ತೆ ಬ೦ದಿದೆ ಶ್ರಾವಣ.
- ಮೇಗರವಳ್ಳಿ ರಮೇಶ್ (೨೭ - ೦೭ -೨೦೧೦)

No comments:

Post a Comment